‘ಚಾಮರಾಜಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲುವುದು ಇರಲಿ ಠೇವಣಿಯೂ ಸಿಗಲ್ಲ’ ಎಂದು ದೇವೇಗೌಡರು ಶುಕ್ರವಾರ ಹೇಳಿದ್ದರು. ಈ ಮಾತಿಗೆ ಶನಿವಾರ ತಿರುಗೇಟು ನೀಡಿದ ಜಮೀರ್, ‘ಕ್ಷೇತ್ರದ ಜನರು ನನ್ನನ್ನು ಇಷ್ಟಪಟ್ಟಿದ್ದಾರೆಯೇ ಹೊರತು ದೇವೇಗೌಡರನ್ನು ಅಲ್ಲ. ನನ್ನನ್ನು ಮಗನಂತೆ ಭಾವಿಸಿದ್ದಾರೆ. ನನ್ನ ಮುಖ ನೋಡಿ ಜೆಡಿಎಸ್ಗೆ ಮತ ಹಾಕುತ್ತಾರೆ’ ಎಂದಿದ್ದಾರೆ.