ಈ ಸಂಬಂಧ ತಮಿಳುನಾಡಿನ ಮೆಟ್ಟೂರು ತಾಲ್ಲೂಕಿನ ಪೆರಿಯಾರ್ ನಗರದ ನಿವಾಸಿ ಮರುಗೇಶ್ನನ್ನು ಬಂಧಿಸಲಾಗಿತ್ತು. ಗ್ರಾಮದ ಶಿವಣ್ಣ ಎನ್ನುವವರ ಜಮೀನಿನಲ್ಲಿ ಕಬ್ಬು ಕಟಾವು ಮಾಡಲು ಈರೋಡ್ನವರಾದ ರಾಜೇಂದ್ರನ್ (37), ಆತನ ಪತ್ನಿ ರಾಜಮ್ಮ (35), ಪುತ್ರಿ ರೋಜಾ (8), ಕಾಶಿ ಅಲಿಯಾಸ್ ಶಿವಕುಮಾರ (38) ಮತ್ತು ಆತನ ಪತ್ನಿ ಶಿವಮ್ಮ (37) ಜತೆಯಲ್ಲಿ ಬಂದಿದ್ದ ಮುರುಗೇಶ್ (47), ನಿದ್ರೆಯಲ್ಲಿದ್ದ ಐವರನ್ನು ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿದ್ದ. ಬಳಿಕ, ರಾಜೇಂದ್ರನ್ ಬಳಿ ಇದ್ದ ಎಟಿಎಂ ಕಾರ್ಡ್ ಹಾಗೂ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದನು.