ಕಮಲಾಪುರ: ಬೆಳಕೋಟಾ, ದಸ್ತಾಪುರ, ನಾವದಗಿ ಸೇರಿದಂತೆ ಕಮಲಾಪುರ ಸುತ್ತಲಿನ ಪ್ರದೇಶದಲ್ಲಿ ಹಂದಿ ಹಾವಳಿ ಹೆಚ್ಚಾಗಿದ್ದು, ಬೆಳೆದ ಬೆಳೆ ರಕ್ಷಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಕಬ್ಬಿನ ತೋಟಕ್ಕೆ ಹಂದಿಗಳ ಕಾಟ ಹೆಚ್ಚಾಗಿದೆ. ಬೆಳಕೋಟಾದ ರೈತ ಅಜೀಜ್ ಪಟೇಲ್ ಅವರ ತೋಟದಲ್ಲಿ ಸುಮಾರು 2 ಎಕರೆ, ಬಸವರಾಜ ಕೋರಿಯವರ ತೋಟದಲ್ಲಿ 1 ಎಕರೆ, ಶಿವನಂದಯ್ಯ ಸ್ವಾಮಿ ಅವರ ತೋಟದಲ್ಲಿ 1 ಎಕರೆ, ಸಿದ್ದಪ್ಪ ಪಾಟೀಲ ತೋಟದಲ್ಲಿ 1 ಎಕರೆ ಕಬ್ಬು ನಾಶಪಡಿಸಿವೆ.