ನಾವು ಶಾಂತಿ ಪ್ರಿಯರು. ನಾವು ಇಲ್ಲಿಯವರೆಗೆ ಯಾವುದೇ ರಾಷ್ಟ್ರದ ಮೇಲೆ ದಾಳಿ ನಡೆಸಿಲ್ಲ. ಅದೇ ನಮ್ಮ ವಿಶೇಷತೆ. ನಮಗೆ ಯುದ್ಧ ಬೇಡ, ಹಿಂಸಾಚಾರಬೇಡ, ಶಾಂತಿ ಮಾತ್ರ ಬೇಕಿದೆ. ನಾವು ನಮ್ಮ ನೆರೆ ರಾಷ್ಟ್ರದವರ ಜತೆ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತೇವೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬುದು ಅವರಿಗೆ ನೆನಪಿರಲಿ. ಪಾಕ್ ಆಕ್ರಮಿತ ಕಾಶ್ಮೀರದ ಒಂದು ಇಂಚು ಭಾಗವನ್ನೂ ನಾವು ಯಾರಿಗೂ ಬಿಟ್ಟುಕೊಡುವುದಿಲ್ಲ. ಭಿನ್ನಾಭಿಪ್ರಾಯಗಳನ್ನು ಒಪ್ಪಬಹುದು ಆದರೆ ಭಾವೈಕ್ಯತೆಗೆ ಧಕ್ಕೆ ತರುವುದನ್ನು ಒಪ್ಪಲಾಗುವುದಿಲ್ಲ ಎಂದು ನಾಯ್ಡು ಗುಡುಗಿದ್ದಾರೆ.