‘ಜೆಡಿಎಸ್ನಲ್ಲಿ ಸೂಟ್ಕೇಸ್ ಸಂಸ್ಕೃತಿ ಇದೆ ಎಂದು ನಾವು ಯಾರಾದರೂ ಹೇಳಿದ್ದರೆ ರಾಜಕೀಯ ಕಾರಣಕ್ಕೆ ಹೇಳುತ್ತಾರೆ ಎನ್ನುತ್ತಿದ್ದರು. ಈಗ ಪ್ರಜ್ವಲ್ ರೇವಣ್ಣ ತಾವಾಗಿಯೇ ಹೇಳಿಲ್ಲ. ದೇವರೇ ಅವರ ಮೂಲಕ ಹೇಳಿದ್ದಾನೆ’ ಎಂದು ತಿಳಿಸಿದರು.
‘ವಿಜಯ್ ಮಲ್ಯ, ರಾಮಸ್ವಾಮಿ, ರಾಜೀವ್ ಚಂದ್ರಶೇಖರ್, ಕುಪೇಂದ್ರರೆಡ್ಡಿ ಅವರನ್ನು ರಾಜ್ಯ ಸಭಾ ಸದಸ್ಯರನ್ನಾಗಿ ಮಾಡುವಾಗ ಯಾರು ಸೂಟ್ ಕೇಸ್ ತೆಗೆದುಕೊಂಡರು ಎಂಬುದನ್ನು ಬಹಿರಂಗಪಡಿಸಲಿ’ ಎಂದು ಹೇಳಿದರು.
ಸಿಬಿಐ ತನಿಖೆ ನಡೆಯಲಿ: ‘ಸೂಟ್ಕೇಸ್ ಸಂಸ್ಕೃತಿ ಬಗ್ಗೆ ಸಿಬಿಐ ತನಿಖೆ ನಡೆಯಲಿ ಎಂದು ಈಗಾಗಲೇ ಹೇಳಿದ್ದೇವೆ. ತನಿಖೆ ನಡೆಸಲು ಅವರೂ ಒಪ್ಪಲಿ. ಜೆಡಿಸ್ ರಾಜ್ಯ ಘಟಕ ಅಧ್ಯಕ್ಷ ಕುಮಾರಸ್ವಾಮಿ ಮಾತಿನ ಮಲ್ಲ. ಯಾವುದನ್ನೂ ಒಪ್ಪುವುದಿಲ್ಲ’ಎಂದರು.