ಬೆಂಗಳೂರು: ಸಿಂಗಪುರ ಪ್ರವಾಸ ಹೊರಟ 38 ಪೌರ ಕಾರ್ಮಿಕರ ತಂಡವನ್ನು ವಿಕಾಸೌಧದಲ್ಲಿ ಸೋಮವಾರ ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಬೀಳ್ಕೊಟ್ಟರು.
‘ಸಿಂಗಪುರದಲ್ಲಿನ ತ್ಯಾಜ್ಯ ನಿರ್ವಹಣೆ ಬಗ್ಗೆ ಅಧ್ಯಯನ ಮಾಡಿ ಬಂದು ಸಲಹೆಗಳನ್ನು ನೀಡಿ. ಅದೇ ರೀತಿಯಲ್ಲಿ ಸ್ವಚ್ಛತೆ ಕಾಪಾಡಲು ಎಲ್ಲರೂ ಒಟ್ಟಾಗಿ ಪ್ರಯತ್ನಿಸೋಣ’ ಎಂದು ಹೇಳಿದರು.
‘ಸಿಂಗಪುರ ಮಾತ್ರವಲ್ಲದೆ ಬೇರೆ ದೇಶಗಳಿಗೂ ಕಾರ್ಮಿಕರನ್ನು ಕರೆದೊಯ್ಯುವ ಆಲೋಚನೆ ಇದೆ. ಅಲ್ಲಿನ ಸರ್ಕಾರಗಳಿಂದ ಅನುಮತಿ ಪಡೆಯುವ ಪ್ರಯತ್ನ ನಡೆಯುತ್ತಿದೆ’ ಎಂದು ಇಲಾಖೆ ನಿರ್ದೇಶಕ ಆರ್. ವಿಶಾಲ್ ತಿಳಿಸಿದರು.