ಸಂಸ್ಥೆಯು ನಷ್ಟದಲ್ಲಿ ನಡೆಯಲು ಸಿಬ್ಬಂದಿ ಹೊಣೆಯಲ್ಲ. ಸರ್ಕಾರದ ಬಿಎಸ್ಎನ್ಎಲ್ ವಿರೋಧಿ ನೀತಿಯಿಂದಾಗಿ ನಷ್ಟ ಉಂಟಾಗಿದೆ. ಮೊಬೈಲ್ ಸಂಪರ್ಕ ಜಾಲ ವಿಸ್ತರಿಸಲು ಅಗತ್ಯವಾದ ಸಾಧನ – ಸಲಕರಣೆಗಳ ಖರೀದಿಗೆ 2006 ರಿಂದ 2012ರವರೆಗೆ ಸರ್ಕಾರ ಅವಕಾಶವನ್ನೇ ನೀಡಿರಲಿಲ್ಲ ಎಂದು ಸಂಸ್ಥೆಯ ಉದ್ಯೋಗಿಗಳ ಸಂಘದ ಸಂಚಾಲಕ ಪಿ. ಅಭಿಮನ್ಯು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.