‘ವಾಗ್ವಾದ ನಡೆಯುತ್ತಿದ್ದಾಗ ಪ್ಯಾಂಟ್ ಜೇಬಿನಿಂದ ಪಿಸ್ತೂಲ್ ತೆಗೆದ ನಿಸಾರ್, ಅದನ್ನು ವಿಶ್ವಾಸ್ ಹಣೆಗೆ ಗುರಿಯಾಗಿಟ್ಟು ರವಿಯ ತಂಟೆಗೆ ಬಂದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ. ನಮ್ಮ ಮಕ್ಕಳಾದ ರೆನಿಟಾ ಮತ್ತು ರೀಮಾ ತಡೆಯಲು ಹೋದರು. ಅವರ ಮೇಲೆ ರವಿ ಮತ್ತು ನಿಸಾರ್ ಹಲ್ಲೆ ನಡೆಸಿದರು. ಆಗ ಸಹಾಯಕ್ಕಾಗಿ ಕೂಗಿಕೊಂಡೆವು. ಸಾರ್ವಜನಿಕರು ಬರುತ್ತಿರುವುದನ್ನು ಕಂಡ ಇಬ್ಬರೂ ಪರಾರಿಯಾದರು’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.