‘ವಿಮಾನದ ಹಿಂಭಾಗದಲ್ಲಿನ ಶೌಚಾಲಯದಲ್ಲಿ ಚಿನ್ನ ಅಡಗಿಸಿಡಲಾಗಿತ್ತು. ಅದನ್ನು ಸಂಜೆ ಮಂಗಳೂರಿನ ಸಿಟಿ ಸೆಂಟರ್ನಲ್ಲಿ ಭೇಟಿಯಾಗುವ ಮಧ್ಯವರ್ತಿಗೆ ತಲುಪಿಸಲು ಸೂಚಿಸಲಾಗಿತ್ತು. ಚಿನ್ನವನ್ನು ವಿಮಾನದಿಂದ ಹೊರಕ್ಕೆ ಸಾಗಿಸಿ, ಮಧ್ಯವರ್ತಿಗೆ ತಲುಪಿಸಲು ₹20,000 ಕೊಡುವ ಭರವಸೆ ನೀಡಿದ್ದರು ಎಂದು ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಹೇಳಿದ್ದಾರೆ.