ಸಂವಿಧಾನದ 8ನೇ ಪರಿಚ್ಛೇದದಲ್ಲಿ ನಮೂದಿಸಲಾದ 22 ಭಾಷೆಗಳಲ್ಲಿ ಹಿಂದಿಯೂ ಒಂದು. ಹಿಂದಿ ‘ಕಲಿಕೆ’ಯ ಕುರಿತು ಯಾರಿಗೂ ತಕರಾರಿಲ್ಲ. ಆದರೆ ಅದನ್ನು ‘ರಾಷ್ಟ್ರಭಾಷೆ’ ಎಂದು ಘೋಷಿಸಿ ದಕ್ಷಿಣದ ರಾಜ್ಯಗಳ ಮೇಲೆ ಹೇರಿಕೆಗೆ ಮುಂದಾದರೆ ಅದನ್ನು ವಿರೋಧಿಸಲೇಬೇಕಾಗುತ್ತದೆ.
ಭಾಷೆ ಆಯಾ ಪ್ರದೇಶದ ಸಂಸ್ಕೃತಿ, ಮೌಲ್ಯಗಳ ಪ್ರತೀಕ. ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಸಲ್ಲಬೇಕು. ಒಬ್ಬ ವ್ಯಕ್ತಿ ಬೇಕಾದಷ್ಟು ಭಾಷೆ ಕಲಿಯಲಿ. ಆದರೆ ತನ್ನ ಭಾಷೆ ‘ಅನಾಥ ಪ್ರಜ್ಞೆ’ಯಿಂದ ಬಳಲುವಂತೆ ಮಾಡಬಾರದು.
ಹಿಂದೊಮ್ಮೆ ಸೇಠ್ ಗೋವಿಂದ ದಾಸ್ ಎಂಬುವರು ‘ಹಿಂದಿ ಒಪ್ಪದಿದ್ದವರನ್ನು ಒಪ್ಪಿಸಲು ಮಿಲಿಟರಿ ಕಳುಹಿಸಬೇಕು’ ಎಂದಿದ್ದರು. ‘ಹಿಂದಿ ಒಪ್ಪದಿದ್ದವರು ದೇಶಭಕ್ತರಲ್ಲ’ ಎಂದು ಮೊರಾರ್ಜಿ ದೇಸಾಯಿ ಹೇಳಿದ್ದು ಈಗ ಇತಿಹಾಸ.