ಲಾಹಿರು ಕುಮಾರ ಬೌಲ್ ಮಾಡಿದ 14ನೇ ಓವರ್ನ ಕೊನೆಯ ಎಸೆತವನ್ನು ಭಾರತದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಕವರ್ಸ್ನತ್ತ ಬಾರಿಸಲು ಮುಂದಾದರು. ಅವರ ಬ್ಯಾಟಿನ ಮೇಲಂಚನ್ನು ಸವರಿಕೊಂಡು ಬಂದ ಚೆಂಡನ್ನು ಎರಡನೇ ಸ್ಲಿಪ್ನಲ್ಲಿದ್ದ ಗುಣರತ್ನೆ ಹಿಡಿಯುವಾಗ ಹೆಬ್ಬೆರಳಿಗೆ ಬಲವಾದ ಪೆಟ್ಟು ಬಿದ್ದಿತ್ತು. ಕೂಡಲೇ ಅವರು ನೋವು ತಾಳಲಾರದೆ ಅಂಗಳದಲ್ಲಿ ಕುಸಿದುಬಿದ್ದರು. ಸ್ಥಳಕ್ಕೆ ಧಾವಿಸಿದ ತಂಡದ ಫಿಸಿಯೊ, ಅಸೆಲಾಗೆ ಪ್ರಥಮ ಚಿಕಿತ್ಸೆ ನೀಡಿ ಅಂಗಳದಿಂದ ಹೊರಗೆ ಕರೆದೊಯ್ದರು.