ಮೈಸೂರು: ನಕಲಿ ಅಂಕಪಟ್ಟಿ ಜಾಲದಲ್ಲಿ ಶಾಮೀಲಾದ ಆರೋಪದಡಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ಸಹಾಯಕ ಕುಲಸಚಿವ ಸಿದ್ದರಾಜು ಸೇರಿ ಮೂವರನ್ನು ನಗರ ಅಪರಾಧ ಪತ್ತೆ ದಳದ (ಸಿಸಿಬಿ) ಪೊಲೀಸರು ಬುಧವಾರ ವಿಚಾರಣೆ ನಡೆಸಿದರು.
ಕೆಎಸ್ಒಯು ಅಂಕಪಟ್ಟಿಗಳ ಮುದ್ರಣದ ಹೊರಗುತ್ತಿಗೆ ಪಡೆದಿದ್ದ ‘ಐಯುಎಂ’ ಕಂಪೆನಿಯ ಮುಖ್ಯಸ್ಥ ವೇಣು ಹಾಗೂ ವಿಶ್ವವಿದ್ಯಾಲಯದ ಹಂಗಾಮಿ ನೌಕರ ಶಿವಣ್ಣ ವಿಚಾರಣೆ ಎದುರಿಸಿದರು.
ಎರಡು ದಿನಗಳ ಹಿಂದೆ ಪೊಲೀಸರ ಬಲಗೆ ಬಿದಿದ್ದ ಹಂಗಾಮಿ ನೌಕರ ಪ್ರಜ್ವಲ್ನನ್ನು ವಿಶ್ವವಿದ್ಯಾಲಯವು ಸೇವೆಯಿಂದ ವಜಾಗೊಳಿಸಿದೆ.