ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ‘ಹಲವಾರು ವರ್ಷಗಳಿಂದ ಗುಪ್ಪಿ ಗುಹೆಗೆ ಬರುವ ಪ್ರವಾಸಿಗರನ್ನು ವೀಕ್ಷಣೆಗೆ ಕರೆದ್ಯೂವ ಕಾರ್ಯವನ್ನು ಹಲವಾರು ವರ್ಷಗಳಿಂದ ಇಲ್ಲಿ ನೆಲೆಸಿರುವ ಜೋಗಿ ಕುಟುಂಬ ನಿರ್ವಹಿಸುತಿತ್ತು. ಭಕ್ತ ಪ್ರವಾಸಿಗರ ಸಂಖ್ಯೆ ಜಾಸ್ತಿಯಾದಂತೆ, ಕಮಲಶಿಲೆ ಬ್ರಾಹ್ಮೀ ದುರ್ಗಾ ಪರಮೇಶ್ವರಿ ದೇವಸ್ಥಾನ ಆಡಳಿತ ಮಂಡಳಿ ಯಾರ ಗಮನಕ್ಕೆ ಬಾರದಂತೆ, ದೇವಳದ ವತಿಯಿಂದ ಕಾಣಿಕೆ ಹುಂಡಿಯನ್ನು ಗುಪ್ಪಿ ಗುಹಾಲಯ ಒಳಗೆ ಪ್ರತಿಷ್ಠಾಪಿಸಿ ದೇವಸ್ಥಾನದ ಜೀರ್ಣೋದ್ಧಾರವೆಂಬ ಫಲಕ ಹಾಕಿಕೊಂಡಿತ್ತು.