ಕೆಪಿಸಿಸಿ ಕಾರ್ಯದರ್ಶಿ ಎಂ.ನಾರಾಯಣಸ್ವಾಮಿ ಮಾತನಾಡಿ, ‘ಪಕ್ಷಕ್ಕೆ ದುಡಿಯುತ್ತಿರುವ ಹಿರಿಯರು ಮತ್ತು ಯುವಕರನ್ನು ಗುರುತಿಸಿ ಅವಕಾಶ ಕಲ್ಪಿಸಿದಾಗ ಮಾತ್ರ ಪಕ್ಷ ಬಲಪಡಿಸಲು ಸಾಧ್ಯ’ ಎಂದು ತಿಳಿಸಿದರು. ಎ.ಅಶ್ವತ್ಥರೆಡ್ಡಿ, ವಿಜಯ ನರಸಿಂಹಯ್ಯ, ಕಬೀರ್, ಮುರಳಿ, ಪದ್ಮನಾಭಯ್ಯ, ನಾರಾಯಣಸ್ವಾಮಿ, ಮೋಹನ್ ಸಿಂಗ್, ರಾಮಸಿಂಗ್, ಸಿದ್ದಾರೆಡ್ಡಿ ಇದ್ದರು.