‘ಗ್ರಾಮ ಪಂಚಾಯಿತಿ ಸದಸ್ಯ ಆನಂದ ಮತ್ತು ಗ್ರಾಮ ಪಂಚಾಯಿತಿ ಕ್ಲರ್ಕ್ ಮಂಜುನಾಥ ಮೊರೆ ಎಂಬುವವರು ಆಶ್ರಯ ಮನೆ ಕೊಡಿಸುವುದಾಗಿ ಭರವಸೆ ನೀಡಿದ್ದರು. ಆಶ್ರಯ ಮನೆ ಕಟ್ಟುವ ಸಂಬಂಧ ನಮ್ಮ ಹಳೆಯ ಮನೆಯನ್ನು ಕೆಡವಿ, ಹೊಸ ಮನೆ ಕಟ್ಟಲು ಅಡಿಪಾಯ ಹಾಕಿದ್ದೇವೆ. ಆದರೆ, ಒಂದು ವರ್ಷವಾದರೂ ನಮಗೆ ಆಶ್ರಯ ಮನೆ ಅನುಮೋದನೆಯಾಗಿಲ್ಲ. ಇದರಿಂದ ಬೀದಿಪಾಲಾಗಿದ್ದೇವೆ ಎಂದು ಪರಶುರಾಮ ನಾಗಣ್ಣವರ ಆರೋಪಿಸಿದರು.