ಬೆಂಗಳೂರು, ಆ. 1– ಕನ್ನಡ ನಿಘಂಟಿನ ಪ್ರಕಟಣೆಯ ಕಾರ್ಯ ವಿಳಂಬವಾಗಿರುವುದೆಂದು ಇಂದು ವಿಧಾನ ಪರಿಷತ್ತಿನಲ್ಲಿ ಒಪ್ಪಿಕೊಂಡ ಶಿಕ್ಷಣ ಸಚಿವ ಶ್ರೀ ಕೆ.ವಿ. ಶಂಕರಗೌಡ ಅವರು, ‘ಕನ್ನಡ ಸಾಹಿತ್ಯ ಪರಿಷತ್ತಿನವರು ಈ ಕೆಲಸವನ್ನು ಮುಗಿಸಲು ಶಕ್ತರಾಗಿದ್ದಾರೆಂದು ಕಂಡರೆ ಅವರಿಗೆ ವಹಿಸಿಕೊಡಲಾಗುವುದು, ಇಲ್ಲವಾದರೆ ಪ್ರಕಟಣೆಯ ಸಂಬಂಧದಲ್ಲಿ ಬೇರೆ ವ್ಯವಸ್ಥೆ ಮಾಡುವ ವಿಚಾರವನ್ನು ಪರಿಶೀಲಿಸಲಾಗುವುದು’ ಎಂದರು.