ಸಣ್ಣ ಹಿಡುವಳಿಯಲ್ಲಿ ಕಾಫಿ ಜತೆ ಇದರ ಕೃಷಿ ಮಾಡುವುದು ವಾಡಿಕೆ. ಎಲ್ಲಾ ಬಳ್ಳಿಗಳಲ್ಲೂ ಎರೆ ಚಂದ ಬಂದಿದೆ. ಆದರೆ, ನಿರೀಕ್ಷಿತ ಮಳೆ ಬಿದ್ದಿಲ್ಲ. ಇದರಿಂದ ಕರಿಮೆಣಸಿನ ಬಳ್ಳಿಯಲ್ಲಿ ಬಿಟ್ಟ ಎರೆಗಳು ಒಣಗಿ ಬೀಳುತ್ತವೆ. ತಂಪಿನ ವಾತಾವರಣ ಕಾಣದಾದರೆ ಕರಿಮೆಣಸು ಕಾರವನ್ನು ಕಳೆದುಕೊಳ್ಳುತ್ತದೆ. ಇದರಿಂದ ಗುಣಮಟ್ಟದ ಕಾಳು ಕೈಸೇರದು ಎನ್ನುವ ಆತಂಕ ವ್ಯಕ್ತಪಡಿಸುತ್ತಾರೆ ಬೇಸಾಯಗಾರರು.