ಆರ್. ಶಿವಕುಮಾರ್ ಭದ್ರಯ್ಯ ವೃತ್ತಿಯಲ್ಲಿ ವ್ಯಾಪಾರಿ. ಸಭೆ, ಶುಭ ಸಮಾರಂಭಗಳಲ್ಲಿ ಮಿಕ್ಕಿದ ಆಹಾರ ಪದಾರ್ಥ ಸಂಗ್ರಹಿಸಿ ಹಸಿದವರಿಗೆ ನೀಡುವುದು ಅವರ ದಿನನಿತ್ಯದ ಕಾಯಕ. ಅವರ ಈ ಸೇವೆಗೆ 16 ವರ್ಷ ತುಂಬಿದೆ. ಈ ಕಾಯಕದಲ್ಲಿಯೇ ನೆಮ್ಮದಿ ಕಂಡುಕೊಂಡಿರುವ ಅವರು ‘ಮುಖ್ಯಮಂತ್ರಿ ಕಳೆದೊದ್ನಪ್ಪೊ’ ಚಿತ್ರ ನಿರ್ದೇಶಿಸಿ ತೆರೆಗೆ ತರುವ ಖುಷಿಯಲ್ಲಿದ್ದಾರೆ. ಅವರ ಪುತ್ರನೇ ಈ ಚಿತ್ರದ ನಾಯಕನಾಗಿರುವುದು ಅವರ ಸಂತಸಕ್ಕೆ ಕಾರಣಗಳಲ್ಲಿ ಒಂದಾಗಿದೆ.