ದಂಬುಲಾ: ‘ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಕೆ.ಎಲ್ ರಾಹುಲ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿದ್ದಾರೆ ಎಂದು ಭಾರತ ತಂಡದ ವ್ಯವಸ್ಥಾಪಕ ಮಂಡಳಿ ಘೋಷಿಸಿದೆ. ಅದರಿಂದ ನನಗೆ ಅವಕಾಶ ಸಿಗುವುದು ವಿಳಂಬವಾದರೂ ಪರವಾಗಿಲ್ಲ. ತಾಳ್ಮೆಯಿಂದ ಕಾಯುತ್ತೇನೆ’ ಎಂದು ಕರ್ನಾಟಕದವರೇ ಆದ ಬ್ಯಾಟ್ಸ್ಮನ್ ಮನೀಷ್ ಪಾಂಡೆ ಹೇಳಿದ್ದಾರೆ.