ಬೆಂಗಳೂರು: ‘ಹೌದ್ರಿ, ಬಡವರ ಕೆಲಸ ಯಾವಾಗಲೂ ತರಾತುರಿಯಲ್ಲೇ ಮಾಡಬೇಕು, ಬಡವರ ಕೆಲಸ ನಿದ್ದೆ ಮಾಡುತ್ತಾ ಮಾಡಲಾಗುತ್ತದೆಯೇ? ಹಸಿವು ನೀಗಿಸುವ ಕೆಲಸ ತರಾತುರಿಯಲ್ಲೇ ಮಾಡಿ ಮುಗಿಸಬೇಕು...’ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಬೆಂಗಳೂರು ನಗರ ಪ್ರದಕ್ಷಿಣೆ ನಡೆಸಿದ ಸಂದರ್ಭದಲ್ಲಿ ಇಂದಿರಾ ಕ್ಯಾಂಟೀನ್ ಬಗ್ಗೆ ಮಾಧ್ಯಮದವರಿಂದ ಎದುರಾದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯೆ ನೀಡಿದರು.