ಚರಂಡಿಯಲ್ಲಿ ಮಳೆ ನೀರು ಮತ್ತು ಕೊಚ್ಚೆ ನೀರು ನಿಲ್ಲುವುದರಿಂದ ಹಲವು ದಿನಗಳವರೆಗೆ ಸುತ್ತಮುತ್ತ ಪ್ರದೇಶವೆಲ್ಲಾ ದುರ್ವಾಸನೆಯಿಂದ ತುಂಬಿಕೊಳ್ಳುತ್ತದೆ. ಈ ಬಗ್ಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು, ಇಲ್ಲಿನ ನಿವಾಸಿಗಳಿಗೆ ಆಗುವ ತೊಂದರೆಯನ್ನು ನಿವಾರಿಸಬೇಕೆಂದು ನಿವಾಸಿಗಳಾದ ಮಂಜಮ್ಮ, ಜಿ.ಟಿ.ಈಶ್ವರಪ್ಪ, ರತ್ನಮ್ಮ, ಲಕ್ಷ್ಮೀದೇವಿ, ಆಮನಾಳ್ ಈಶ್ವರಪ್ಪ, ಕವಿತಾ ನರಸಿಂಹರಾಜು, ಅಣ್ಣಪ್ಪ, ಪ್ರೇಮಾ, ರವಿ ಆಗ್ರಹಿಸಿದ್ದಾರೆ.