ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಮಳೆ

Last Updated 21 ಆಗಸ್ಟ್ 2017, 8:38 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದಲ್ಲಿ ಭಾನುವಾರ ಸಾಧಾರಣ ಮಳೆಯಾಗಿದೆ. ಮುಂಜಾನೆಯಿಂದಲೇ ಆರಂಭ ವಾದ ಜಡಿ ಮಳೆ ಸಂಜೆಯವರೆಗೂ ಬಿಟ್ಟು ಬಿಟ್ಟು ಬರುತ್ತಿತ್ತು. ಮೋಡ ಕವಿದ ವಾತಾವರಣವಿತ್ತು. ಎಂ.ಜಿ.ರಸ್ತೆಯ ಇಕ್ಕೆಲದಲ್ಲಿ ಕೆಸರು ಮಯವಾಗಿ ಪಾದಚಾರಿಗಳು ಸಂಚರಿಸಲು ಪರದಾಡುವಂತಾಗಿತ್ತು ತಾಲ್ಲೂಕಿನ ವಸ್ತಾರೆ, ಜೋಳದಾಳ್, ಕಳಸ, ಅಂಬಳೆ, ಮೈಲಿಮನೆ ಯಲ್ಲಿ ಉತ್ತಮ ಮಳೆಯಾಗಿದೆ.

ಶೃಂಗೇರಿ: ಶೃಂಗೇರಿ ತಾಲ್ಲೂಕಿನಲ್ಲಿ ಭಾನುವಾರ ಉತ್ತಮ ಮಳೆಯಾಗಿದೆ. ತುಂಗಾ ನದಿಯ ನೀರಿನ ಪ್ರಮಾಣ ಏರಿಕೆಯಾಗಿದೆ.ತಾಲ್ಲೂಕಿನಲ್ಲಿ 24 ಗಂಟೆಯಲ್ಲಿ 49.0 ಮಿ.ಮೀ. ಮಳೆಯಾಗಿದೆ.

ಚೌತಿ: ಮಕ್ಕಳಿಗೆ ಸ್ಪರ್ಧೆ
ಮಂಗಳೂರು: ಬಿಜೈಯ ಮಿತ್ರ ಮಂಡಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ ಇದೇ 25,26 ರಂದು 28ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಲಾಗುವುದು.

ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ದಾಸರಗೀತೆ ಸ್ಪರ್ಧೆಯನ್ನು ಇದೇ 25ರಂದು ಬಿಜೈ ಯ ಶ್ರದ್ಧಾನಂದ ನಗರದಲ್ಲಿ ಮಧ್ಯಾಹ್ನ 2.30ಕ್ಕೆ ಏರ್ಪಡಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಸ್ಪರ್ಧಾ ಸಂಯೋಜಕರಾದ ಸುಧಾಕರ ರಾವ್ ಪೇಜಾವರ, ವಸಂತ ವಿಹಾರ ಬಿಜೈ ಅಂಚೆ ಮಂಗಳೂರು–575004 ದೂ.2223137, 9448546051, ಅಥವಾ ಬಿಜೈ ಘನ ಶ್ಯಾಮ ಶೆಟ್ಟಿ 2216138, 9448356138 ಇವರಲ್ಲಿ ನೋದಾಯಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT