ಢಾಕಾ: ಶಿಕ್ಷಕಿಯೊಬ್ಬರು 28 ವಿದ್ಯಾರ್ಥಿಗಳಿಗೆ ಕಲುಷಿತ ನೀರು ಕುಡಿಯುವಂತೆ ಒತ್ತಾಯಿಸಿದ ಪ್ರಕರಣ ಕುರಿತು ಬಾಂಗ್ಲಾದೇಶದ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.
ಢಾಕಾದ ದಕ್ಷಿಣ ಭಾಗ ಜಜಿರಾದ ಪ್ರಾಥಮಿಕ ಶಾಲೆಯ ಶಿಕ್ಷಕಿ ಶಹ್ನಾಜ್ ಪರ್ವಿನ್ ಶಿಕ್ಷೆಯಾಗಿ ವಿದ್ಯಾರ್ಥಿಗಳಿಗೆ ಕಲುಷಿತ ನೀರು ಕುಡಿಯುವಂತೆ ಒತ್ತಾಯಪಡಿಸಿದ ಆರೋಪ ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳ ಪೋಷಕರು ಶಿಕ್ಷಕಿ ವಿರುದ್ಧ ದೂರು ನೀಡಿದ್ದಾರೆ.
‘ನಿಯಮ ಉಲ್ಲಂಘಿಸಿರುವುದು ಸಾಬೀತಾದರೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಆಡಳಿತಾಧಿಕಾರಿ ರಹೇಲಾ ರಹಮತುಲ್ಲಾಹ್ ತಿಳಿಸಿದ್ದಾರೆ.