ತಿತಿಮತಿ, ಮಾಯಮುಡಿ, ಕೊಟ್ಟಗೇರಿ, ಬಾಳೆಲೆ , ನಿಟ್ಟೂರು ಭಾಗಗಳಲ್ಲಿ ಗದ್ದೆಗಳನ್ನು ಉಳುಮೆ ಮಾಡಲೂ ಸಾಧ್ಯವಾಗಿಲ್ಲ. ಕೊಡಗಿನ ಗಡಿಭಾಗಗಳಾಗಿರುವ ಈ ಗ್ರಾಮಗಳಿಗೆ ಸಹಜವಾಗಿಯೇ ಮಳೆ ಕಡಿಮೆ. ಈ ವರ್ಷವಂತೂ ಮತ್ತೂ ಇಳಿಮುಖವಾಗಿದೆ. ಈಬಾರಿ ಮೇ ತಿಂಗಳಿನಲ್ಲಿ ಬಿದ್ದ ಉತ್ತಮ ಮಳೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ನೀಗಿದೆ.