‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಸ್ಟೇಷನ್ ಮಾಸ್ಟರ್ ಗೋಪಾಲಕೃಷ್ಣ, ‘ನಿಲ್ದಾಣದಲ್ಲಿ 15 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕುಗಳು ಇವೆ. ಕೊಳವೆ ಬಾವಿಯಿಂದ ಸರಬರಾಜಾಗುವ ನೀರನ್ನು ಬಳಸಲಾಗುತ್ತಿತ್ತು. 15 ದಿನದ ಹಿಂದೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ತೊಂದರೆಯಾಗಿದೆ. ಈ ವಿಚಾರವನ್ನು ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.