ಸರ್ಕಲ್ ಇನ್ಸ್ಪೆಕ್ಟರ್ ಸಂಗನಾಥ ಜಿ.ಆರ್. ಅವರ ಮಾತಿನಿಂದ ಮನನೊಂದು ನಿದ್ರೆ ಮಾತ್ರೆ ಸೇವಿಸುತ್ತಿರುವುದಾಗಿ ಮೊದಲೇ ಪತ್ರ ಬರೆದಿಟ್ಟಿದ್ದ ಅಸಾದಿ, ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದು ದಾವಣಗೆರೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ ದೂರುದಾಖಲಾಗಿಲ್ಲ.
ಪಟ್ಟಣದಲ್ಲಿ ಬೆಳಿಗ್ಗೆ ನಡೆದ ರೈತರ ಪ್ರತಿಭಟನೆ ಬಂದೋಬಸ್ತ್ಗೆ ಅಸಾದಿ ತಡವಾಗಿ ಬಂದಿದ್ದರು ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ ಸರ್ಕಲ್ ಇನ್ಸ್ಪೆಕ್ಟರ್, ‘ಇಲ್ಲೇನು ಶಾಪಿಂಗ್ಗೆ ಬಂದಿದ್ದೀರಾ? ಅಧೀನ ಸಿಬ್ಬಂದಿ ಎಲ್ಲಿ? ನಿಮಗೇನು ಜವಾಬ್ದಾರಿ ಇಲ್ಲವೇ?’ ಎಂದಿದ್ದಾರೆ. ಎಲ್ಲರ ಎದುರಿನಲ್ಲೇ ಈ ರೀತಿ ಕೇಳಿದ್ದಕ್ಕೆ ಅಸಾದಿ ನೊಂದುಕೊಂಡಿದ್ದರು ಎನ್ನಲಾಗಿದೆ.