ದೇವರಾಜ ಅರಸು ಜನ್ಮ ಶತಮಾನೋತ್ಸವದ ಪ್ರಯುಕ್ತ ಬಡವರ ಹಾಗೂ ರೈತರ ಪರವಾಗಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಕೊಳೆಗೇರಿ ನಿವಾಸಿಗಳ ನಿವೇಶನ– ವಸತಿ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಉನ್ನತ ಅಧಿಕಾರ ಸಮಿತಿ ರಚಿಸಬೇಕು. ಸಮಿತಿಯಲ್ಲಿ ಹೋರಾಟ ನಿರತ ಪ್ರತಿನಿಧಿಗಳು ಇರಬೇಕು ಎಂದು ಸಮಿತಿ ಸಂಚಾಲಕ ಮೌಲಾನಾಯ್ಕ ಒತ್ತಾಯಿಸಿದರು.