ಹಿರೇಕೆರೂರ: ಮುಂಗಾರು ಮಳೆ ಕೊರತೆಯಿಂದ ತಾಲ್ಲೂಕಿನಲ್ಲಿ ಬೆಳೆದು ನಿಂತಿರುವ ಬೆಳೆಗಳು ಬಾಡಲಾರಂಭಿಸಿವೆ. ಕಾಳು ಕಟ್ಟುವ ಹಂತದಲ್ಲಿದ್ದ ಗೋವಿನ ಜೋಳದ ದಂಟುಗಳು ಒಣಗುತ್ತಿದ್ದು, ಹತ್ತಿ ಬೆಳೆ ಬಾಡುತ್ತಿದೆ. ತಾಲ್ಲೂಕಿನ ಕಳಗೊಂಡ, ಕೋಡ, ಕ್ಯಾತನಕೇರಿ, ನೂಲಗೇರಿ, ಹಿರೇ ಯಡಚಿ, ಚಿಕ್ಕಯಡಚಿ ಮತ್ತಿತರ ಗ್ರಾಮ ಗಳಲ್ಲಿ ಮಳೆ ಇಲ್ಲದೇ ತೇವಾಂಶದ ಕೊರ ತೆಯಿಂದ ಗೋವಿನ ಜೋಳದ ತೆನೆಗಳಲ್ಲಿ ಕಾಳು ಕಟ್ಟಿಲ್ಲ.