ವೃದ್ಧಾಶ್ರಮದಲ್ಲಿದ್ದ 11 ಪುರುಷರು, ಮೂವರು ಮಹಿಳೆಯರಿಗೆ ತಲಾ ಒಂದೊಂದು ಉಲ್ಲನ್ ಜರ್ಕಿನ್ ಮತ್ತು ಸೊಳ್ಳೆ ಪರದೆ ವಿತರಣೆ ಮಾಡಿ, ಹೋಳಿಗೆ ಊಟ ಉಣಬಡಿಸಿದರು. ಪಟ್ಟಣ ಪಂಚಾಯ್ತಿ ಸದಸ್ಯ ಸಣ್ಣ ಕೊತ್ಲಪ್ಪ ಮಾತನಾಡಿ,‘ಮೋಜು ಮಸ್ತಿ ಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡುವ ಬದಲು ಪ್ರತಿಯೊಬ್ಬ ಯುವಕರು ತಮ್ಮ ಕೈಲಾದ ಮಟ್ಟಿಗೆ ಬಡವರು, ವೃದ್ಧರು, ಅಶಕ್ತರಿಗೆ ದಾನ ಮಾಡಿದರೆ ಹಬ್ಬದ ಆಚರಣೆಗೆ ಆರ್ಥ ಬರುತ್ತದೆ’ ಎಂದು ಹೇಳಿದರು.