ಬೀದರ್ ಕೀ ರಾಜಾ ಗಣೇಶ ಮಂಡಳಿಯ ಹನುಮಾನ, ನರಸಿಂಹನೊಂದಿಗೆ ಇರುವ ಗಣೇಶ, ಧೋಬಿ ಗಲ್ಲಿಯ ಸಿಂಹಾಸನಾಧೀಶ ವಿಘ್ನ ನಿವಾರಕ, ಗಾಂಧಿಗಂಜ್ನ ನವಿಲು ಮೇಲೆ ಕುಳಿತ ಲಂಬೋದರ, ಚಿದ್ರಿಯ ಹನುಮಾನ ಸೇನಾ ಗಣೇಶ ಮಂಡಳಿಯ ಶಿವಲಿಂಗದಲ್ಲಿರುವ ಬೆನಕ, ಗುಂಪಾದ ಕನ್ನಡಾಂಬೆ ಗೆಳೆಯರ ಬಳಗದ ಮಣ್ಣಿನಿಂದ ತಯಾರಿಸಿದ ಸ್ವಚ್ಛ ಭಾರತ ಸಂದೇಶ ಸಾರುವ ಪರಿಸರ ಸ್ನೇಹಿ ಏಕದಂತ, ಪ್ರತಾಪನಗರದ 25 ಅಡಿ ಎತ್ತರದ ರಥದಲ್ಲಿ ತೆರಳುತ್ತಿರುವ ಬೃಹತ್ ಗಣಪ, ಪಾಠಕ್ ಗಲ್ಲಿ ಗಣೇಶ, ಸಿಂಹದ ಮೇಲೆ ಕುಳಿತ ರಾಮಮಂದಿರ ಗಣೇಶ, ಕಾಡು ಬೆಳೆ ನಾಡು ಉಳಿಸಿ ಸಂದೇಶ ಹೊತ್ತ ಚೌಬಾರಾ ಗಣೇಶ, ಸ್ವದೇಶಿ ವಸ್ತು ಬಳಕೆ ಜಾಗೃತಿಗೆ ಒತ್ತು ಕೊಟ್ಟಿರುವ ಕ್ರಾಂತಿ ಗಣೇಶ ಮೊದಲಾದ ಗಣೇಶನ ಮೂರ್ತಿಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ.