ಕೊಪ್ಪಳ: ನಗರದಲ್ಲಿ ಸೋಮವಾರ ಉತ್ತಮವಾಗಿ ಮಳೆ ಸುರಿಯಿತು. 2ಕ್ಕೂ ಹೆಚ್ಚು ಸಮಯ ಮಳೆಯಾಯಿತು. ಮಧ್ಯಾಹ್ನ 1ಗಂಟೆಗೆ ಆರಂಭವಾದ ಎಡಬಿಡದೆ ಬಂದಿತು. ಕೇಂದ್ರೀಯ ಬಸ್ ನಿಲ್ದಾಣದ ಎದುರು ನಗರದ ರಾಜಕಾಲುವೆ ತುಂಬಿ ನೀರು ರಸ್ತೆ ಮೇಲೆ ಹರಿದವು. ಇದರಿಂದ ಬಸ್, ವಾಹನ ಸಂಚಾರ ಅಸ್ಥವ್ಯಸ್ಥವಾಯಿತು.
ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತು. ಪ್ರಮುಖ ಸ್ಥಳಗಳಲ್ಲಿ ಜನಜೀವನ ಅಸ್ತವ್ಯಸ್ತವಾಯಿತು. ಜಿಲ್ಲೆಯ ಕೆಲ ಗ್ರಾಮಗಳಲ್ಲಿಯೂ ಉತ್ತಮ ವರ್ಷಧಾರೆಯಾದ ವರದಿ ಬಂದಿದೆ.