‘ಸಂಗಣ್ಣ ಅವರ ಜೋಳದ ಬೆಳೆ ಹಾಳಾಗಿದ್ದು, ಅವರಿಗೆ ದಿಕ್ಕು ತೋಚದಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಪರಿಹಾರ ಅವರಿಗೆ ಪರಿಹಾರ ಒದಗಿಸಬೇಕು’ ಎಂದು ವೀರಶೈವ ಸಮಾಜದ ಅಧ್ಯಕ್ಷ ಕೊಟ್ರಯ್ಯ ಸ್ವಾಮಿ ಒತ್ತಾಯಿಸಿದ್ದಾರೆ. ಕಕ್ಕೇರಾದಲ್ಲಿ ಮೂರು ದಿನಗಳಿಂದ 69 ಮಿ.ಮೀ ಮಳೆ ಸುರಿದಿದೆ. ಪಟ್ಟಣದ ಕೆಲವು ವಾರ್ಡ್ಗಳಲ್ಲಿ ಸಿ.ಸಿ ರಸ್ತೆಗಳು ಮಳೆ ನೀರಿಗೆ ಕೊಚ್ಚಿ ಹೋಗಿವೆ.