ಕೋಟ(ಬ್ರಹ್ಮಾವರ): ಕೋಟತಟ್ಟು ಪಡುಕರೆ ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾಸಭೆ ಈಚೆಗೆ ಸಂಘದ ಅಧ್ಯಕ್ಷ ಕೆ. ಶಿವಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಕೋಟತಟ್ಟು ಪಡುಕರೆಯಲ್ಲಿ ನಡೆಯಿತು.
ಒಕ್ಕೂಟದ ಉಪವ್ಯವಸ್ಥಾಪಕ ಡಾ.ಮನೋಹರ್ ಕೆ ಹಾಗೂ ವಿಸ್ತರಣಾಧಿಕಾರಿ ಸರಸ್ವತಿ ಸಂಘದಿಂದ ಸದಸ್ಯರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
‘ಹೆಚ್ಚು ಹಾಲು ಪೂರೈಕೆ ಮಾಡಿದ ಹಾಗೂ ವರ್ಷದ ಎಲ್ಲ ದಿನ ಹಾಲು ಪೂರೈಕೆ ಮಾಡಿದ ಸದಸ್ಯರನ್ನು ಗೌರವಿಸಲಾಯಿತು. ಸಂಘಕ್ಕೆ ಉತ್ತಮ ಗುಣಮಟ್ಟದ ಹಾಲು ಪೂರೈಕೆ ಮಾಡುವಂತೆ ಅಧ್ಯಕ್ಷರು ವಿನಂತಿಸಿದರು.
ಸಂಘದ ಆಡಳಿತ ನಿರ್ದೇಶಕ ಕೆ.ಶಿವಾನಂದ ಐತಾಳ, ಎಂ.ಭಾಸ್ಕರ್ ಶೆಟ್ಟಿ, ಎಂ.ಜಯರಾಮ್ ಶೆಟ್ಟಿ, ಕೆ. ಶಂಕರ್ ಗಾಣಿಗ, ಎಂ.ಕೃಷ್ಣ ಹಂದೆ, ಗಾಯತ್ರಿ ಆರ್.ಹಂದೆ, ಅಕ್ಕಮ್ಮ, ಎಚ್.ಪ್ರಭಾವತಿ ಇದ್ದರು.