ದುಬಾರೆ, ತಿತಿಮತಿ, ಬಳ್ಳೆ, ಕೆ.ಗುಡಿ, ಬಂಡೀಪುರ ಆನೆ ಶಿಬಿರಗಳಿಂದ ಒಟ್ಟು ಆರು ಆನೆಗಳನ್ನು (ದಸರಾ ಆನೆ ಹೊರತುಪಡಿಸಿ) ಕೊಡುವಂತೆ ಮನವಿ ಸಲ್ಲಿಸಲಾಗಿದೆ.
ಆನೆಗಳೊಂದಿಗೆ ಮಾವುತ, ಕಾವಾಡಿ ಮತ್ತು ಅವರ ಕುಟುಂಬದವರಿಗೂ ತಾತ್ಕಾಲಿಕ ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ ದುಬಾರೆ, ಸಕ್ಕರೆ ಬೈಲು ಮಾದರಿಯಲ್ಲಿ ಆನೆ ಸಫಾರಿಗೂ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದೆ.