ರಸ್ತೆಯಲ್ಲಿ ಕಾಂಕ್ರೀಟ್ ಕಾಮಗಾರಿ ಮಾಡುವುದಾಗಿ ಕಳೆದ ಎರಡು ತಿಂಗಳ ಹಿಂದೆ ರಸ್ತೆಯನ್ನು ಅಗೆಯಲಾಯಿತು. ಇಲ್ಲಿಯವರೆಗೂ ಸರಿಪಡಿಸಿಲ್ಲ, ಒಳಚರಂಡಿ ಕಾಮಗಾರಿಗೆ ರಸ್ತೆಯನ್ನು ಅಗೆದು ಪೈಪ್ ಅಳವಡಿಸಿದವರು ಸರಿಯಾಗಿ ಮುಚ್ಚದೆ ಉಬ್ಬು ಮಾಡಿರುವುದರಿಂದ ಸ್ನೇಹಿತರೊಬ್ಬರ ಕಾರಿನ ಕೆಳಭಾಗಕ್ಕೆ ಹೊಡೆದು ಸುಮಾರು ₹ 15 ಸಾವಿರದಷ್ಟು ಖರ್ಚಾಗಿದೆ, ನಗರಸಭೆಯವರು ಸರಿಪಡಿಸಬೇಕು, ಇಲ್ಲವಾದಲ್ಲಿ ಜನತೆಗೆ ಓಡಾಡಲು ತೊಂದರೆಯಾಗುತ್ತದೆ ಎಂಬುದು ಪರಮೇಶ್ ಅವರ ದೂರು.