‘ಗ್ರಾಮೀಣ ಪ್ರದೇಶಗಳಲ್ಲಿ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರ ಲಕ್ಷಾಂತರ ರೂಪಾಯಿ ಅನುದಾನ ಖರ್ಚು ಮಾಡು ತ್ತಿದೆ. ಆದರೆ, ಆ ಅನುದಾನ ಇಲ್ಲಿ ತಲುಪಿಲ್ಲ. ಶಾಲೆ ಹಳೆಯದಾಗಿರುವುದ ರಿಂದ ಒಂದು ಕೊಠಡಿಯ ಚಾವಣಿ, ಆರ್ಸಿಸಿ ಕುಸಿದು ಬೀಳುತ್ತಿದೆ. ಹೀಗಾಗಿ, ಮಳೆಗಾಲದಲ್ಲಿ ಕೊಠಡಿ ಸೋರುತ್ತಿದ್ದು ಆಕಸ್ಮಿಕವಾಗಿ ಮಕ್ಕಳ ಮೇಲೆ ಸ್ಲ್ಯಾಬ್ ಬಿದ್ದು ಅಪಾಯ ಘಟಿಸುವ ಭಯ ಇದೆ’ ಎಂದು ಗ್ರಾಮದ ಬಸವರಾಜ ಶಾಲಿ, ಮಲ್ಲೇಶಪ್ಪ ಹರಿಜನ ಹೇಳಿದರು.