ಕಂಪ್ಲಿ: ಸಮೀಪದ ಮೆಟ್ರಿ ಗ್ರಾಮದ ಪ್ರಣವಜ್ಯೋತಿ ಮಹಾ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ರಥೋತ್ಸವದ ಅಂಗವಾಗಿ ವಿಶ್ವಾರಾಧ್ಯ ಗುರುಕುಲ ಮಠದಲ್ಲಿ ಪಂಚಪೀಠಾಧೀಶ್ವರ ಶಿಲಾ ಮೂರ್ತಿಗಳು, ಉಜ್ಜಯಿನಿ ಸಿದ್ಧಲಿಂಗೇಶ್ವರ ಮತ್ತು ಎಮ್ಮಿಗನೂರು ಜಡೆಸಿದ್ದೇಶ್ವರ, ನವಗ್ರಹ, ಗಣೇಶ, ಶ್ರೀಕ್ಷೇತ್ರ ಸ್ಥಾಪಕರಾದ ಮಹಾ ದೇವತಾತ, ಗೌರಮ್ಮನವರ ಶಿಲಾ ಮೂರ್ತಿಗಳಿಗೆ ಭಕ್ತರು ವಿಶೇಷ ರುದ್ರಾಭಿಷೇಕ ನೆರವೇರಿಸಿದರು.