ಹುಣಸಗಿ (ಯಾದಗಿರಿ ಜಿಲ್ಲೆ): ಸಮೀಪದ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಶುಕ್ರವಾರ ಕೃಷ್ಣಾ ನದಿಗೆ 47 ಸಾವಿರ ಕ್ಯುಸೆಕ್ ನೀರು ಹರಿಬಿಡಲಾಯಿತು.
ಮಹಾರಾಷ್ಟ್ರದಲ್ಲಿ ಕೃಷ್ಣಾ ನದಿ ಪಾತ್ರದಲ್ಲಿ ಮಳೆಯಾಗಿದ್ದರಿಂದ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದಾಗಿ ನಾರಾಯಣಪುರ ಬಸವಸಾಗರ ಜಲಾಶಯ ಸಂಪೂರ್ಣ ಭರ್ತಿಯಾಗಿದೆ.
‘ಶುಕ್ರವಾರ ಮಧ್ಯಾಹ್ನದಿಂದ ಜಲಾಶಯದ 8 ಕ್ರಸ್ಟ್ಗೇಟ್ಗಳಿಂದ 47,700 ಕ್ಯುಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ’ ಎಂದು ನಿಗಮದ ಜಲಾಶಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ತಂಬಿದೊರೈ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಜಲಾಶಯದ ನೀರಿನ ಮಟ್ಟ (ಶುಕ್ರವಾರ ಸಂಜೆ)
ಗರಿಷ್ಠ: 492.252 ಮೀ
ಪ್ರಸ್ತುತ ಸಂಗ್ರಹ: 492.25 ಮೀ (33 ಟಿಎಂಸಿ ಅಡಿ)
ಒಳಹರಿವು: 54,000 ಕ್ಯುಸೆಕ್
ಹೊರಹರಿವು: 47,700 ಕ್ಯುಸೆಕ್
8,100 ಕ್ಯುಸೆಕ್ ಕಾಲುವೆಗಳಿಗೆ