ಉಡುಪಿ: ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ಮರಳುಗಾರಿಕೆ ಶುಕ್ರವಾರದಿಂದ ಪುನಃ ಆರಂಭವಾಗಿದೆ. ಸುದೀರ್ಘ ಅವಧಿಗೆ ಮರಳುಗಾರಿಕೆ ಬಂದ್ ಆಗಿದ್ದ ಕಾರಣ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಇತರ ಜಿಲ್ಲೆಗಳಿಂದ ಬರುವ ಮರಳಿನ ಬೆಲೆಯೂ ಗಗನಕ್ಕೇರಿದ್ದರಿಂದ ಮನೆ ನಿರ್ಮಾಣ, ರಿಪೇರಿ ಕಾರ್ಯವನ್ನು ಬಡವರು ಕೈಬಿಡುವ ಅನಿವಾರ್ಯತೆ ಸೃಷ್ಟಿಯಾಗಿತ್ತು.