ದೇವನಹಳ್ಳಿ: ನಗರದ ಅಕ್ಕು ಪೇಟೆ ಜಾಮೀಯ ಮಸೀದಿ ಆವರಣದಲ್ಲಿ ಶುಕ್ರವಾರ ಸಂಭ್ರಮದ ಬಲಿದಾನ ಹಬ್ಬವನ್ನು ಮುಸ್ಲಿಮರು ಆಚರಿಸಿದರು. ಪ್ರಾರ್ಥನೆಯ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಾಮೀಯ ಮಸೀದಿ ಅಧ್ಯಕ್ಷ ಅಬ್ದುಲ್ ಖುದ್ದುಸ್, ತ್ಯಾಗ್ ಬಲಿದಾನ ಸೌಹಾರ್ದಗಳ ಸಂಕೇತವಾಗಿ ಬಕ್ರೀದ್ ಅನ್ನು ಸಾಮೂಹಿಕವಾಗಿ ಆಚರಿಸ ಲಾಗುತ್ತದೆ. ಮೈಸೂರು ಹುಲಿ ಟಿಪ್ಪು ಸುಲ್ತಾನ್ ಬಾಲ್ಯದಲ್ಲಿ ಇದೇ ಮೈದಾನದಲ್ಲಿ ಪ್ರಾರ್ಥನೆ ಮಾಡುತ್ತಿದ್ದರು ಎಂದರು.