ಶಹಾಪುರ: ಇಲ್ಲಿನ ಮೊಚಿಗಡ್ಡೆ ರಸ್ತೆಯ ಮಧ್ಯದಲ್ಲಿ ಬಸವೇಶ್ವರ ವೃತ್ತದ ಹತ್ತಿರ ವಿಶ್ವಗುರು ಬಸವಣ್ಣನವರ ಅಶ್ವರೂಢ ಪ್ರತಿಮೆ ಸ್ಥಾಪನೆಗೆ ಕಟ್ಟೆಯ ಕೆಲಸ ಭರದಿಂದ ಸಾಗಿದೆ.
ಪ್ರತಿಮೆ ಸ್ಥಾಪನೆಗೆ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಹಾಗೂ ಮಠಾಧೀಶರು ನಿರಂತರವಾಗಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಮೇಲೆ ಒತ್ತಡ ತಂದಾಗ ಜನಪ್ರತಿನಿಧಿಗಳು ಬಸವ ಜಯಂತಿಯ ದಿನ ಅಡಿಗಲ್ಲು ಹಾಕಿದ್ದರು.