‘ಪ್ರತಿಭಟನೆ ಮಾಡಿ ನನ್ನ ವ್ಯವಹಾರ ನಿಲ್ಲಿಸಿದ್ದಾರೆ ಎಂದು ಕುಪಿತವಾಗಿರುವ ಮೂರ್ಖಣಪ್ಪ ನಮ್ಮ ಮಕ್ಕಳಾದ ಮಣಿಕಂಠ ಮತ್ತು ಕಿರಣ್ ಮೇಲೆ ಪೋಲೀಸ್ ಠಾಣೆಗೆ ದೂರು ನೀಡಿ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುತ್ತೇನೆ ಎಂದು ದಮಕಿ ಹಾಕುತ್ತಿದ್ದಾನೆ. ಈ ಬಗ್ಗೆ ಪೋಲೀಸರು ಸೂಕ್ತ ತನಿಖೆ ನಡೆಸಿ ಮಹಿಳೆಯರು ಮತ್ತು ವಿದ್ಯಾರ್ಥಿಗಳ ಮೇಲೆ ಯಾವುದೇ ಪ್ರಕರಣ ದಾಖಲಿಸದೆ. ಅಗ್ರಹಾರ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಶಾಶ್ವತವಾಗಿ ನಿಲ್ಲಿಸುವಂತೆ’ ಮನವಿ ಮಾಡಿದರು. ಸ್ತ್ರೀಶಕ್ತಿ ಸಂಘದ ಶಾರದಮ್ಮ, ಸಾಕಮ್ಮ, ರೇಣುಕಮ್ಮ, ಲಕ್ಷ್ಮಕ್ಕ, ರಂಗಮ್ಮ, ಕಾಂತಮ್ಮ, ಭಾಗ್ಯಮ್ಮ, ತಿಮ್ಮಪ್ಪ, ಮಣಿಕಂಠ ಇದ್ದರು.