‘ನಾಡಕಚೇರಿ ನಡೆಯುತ್ತಿರುವ ಸ್ಥಳವು ತಾಲ್ಲೂಕು ಪಂಚಾಯಿತಿಗೆ ಸೇರಿದ್ದು, ಉಪ ತಹಶೀಲ್ದಾರರ ಕಚೇರಿಯೂ ಆಗಿರುವ ನಾಡಕಚೇರಿಯಲ್ಲಿ ಸಾರ್ವಜನಿಕರಿಗೆ ಸಂಬಂಧಿಸಿದ ದಾಖಲೆಗಳು, ಸರ್ಕಾರಕ್ಕೆ ಸಂಬಂಧಿಸಿದ ದಾಖಲೆಗಳು, ಉಪಕರಣಗಳು, ಕಡತಗಳು ಇರುತ್ತವೆ. ಇದು ಸರ್ಕಾರಿ ಕಚೇರಿಯಾಗಿರುವುದರಿಂದ ಇಲ್ಲಿ ಖಾಸಗಿಯವರು ಸ್ವಹಿತ ಕಾಪಾಡಿಕೊಳ್ಳುವ ವ್ಯವಹಾರ ನಡೆಸಲು ಅನುಮತಿ ಇಲ್ಲ, ಭದ್ರತೆ ದೃಷ್ಟಿಯಿಂದಲೂ ಇದು ಸಮಂಜಸವಲ್ಲ. ಹಾಗಿದ್ದರೂ ಉಪ ತಹಶೀಲ್ದಾರರ ಗಮನಕ್ಕೆ ಬಂದು ಇಲ್ಲಿ ಅಂಗಡಿ ಸ್ಥಾಪಿಸಲು ಪ್ರಯತ್ನ ನಡೆದಿದೆ. ಈ ಕುರಿತು ಉಪ ತಹಶೀಲ್ದಾರರನ್ನು ಪ್ರಶ್ನಿಸಿದರೆ ಹಾರಿಕೆ ಉತ್ತರ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.