‘ಹೆಮ್ಮಕ್ಕಿ ಅರಣ್ಯ ಪ್ರದೇಶದಿಂದ ಗ್ರಾಮಕ್ಕೆ ಬರುವ ಕಾಡುಕೋಣಗಳು, ಗುಂಪು ಗುಂಪಾಗಿ ದಾಳಿ ನಡೆಸುತ್ತವೆ. ಆಹಾರಕ್ಕಾಗಿ ತೋಟದೊಳಗೆ ತಿರುಗಾಡುವುದರಿಂದ, ಕಾಫಿ, ಕಾಳು ಮೆಣಸು, ಬಾಳೆ ಬೆಳೆಯೆಲ್ಲವೂ ನಾಶವಾಗುತ್ತಿವೆ. ಹಗಲು ವೇಳೆಯಲ್ಲಿಯೇ ಕಾಡುಕೋಣಗಳ ಗುಂಪು ತೋಟ ಪ್ರವೇಶಿಸಿದ ಹಲವು ಘಟನೆಗಳು ನಡೆದಿದ್ದು, ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಕಾರ್ಮಿಕರು ಭಯಗೊಂಡಿದ್ದಾರೆ. ಅನೇಕ ಬಾರಿ ಅರಣ್ಯ ಇಲಾಖೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ.