ಭಾರತದ ರಾಜಕೀಯ ರಂಗದಲ್ಲೇ ಐತಿಹಾಸಿಕ ಕ್ರಮವಾಗಲಿರುವ ಈ ಹುದ್ದೆಗಳ ನೇಮಕದಿಂದ ಸಾರ್ವಜನಿಕ ರಂಗದಲ್ಲಿ ಮಂತ್ರಿಗಳ ಮತ್ತು ಇಲಾಖಾ ಕಾರ್ಯದರ್ಶಿಗಳ ಬಗೆಗೆ ಬರುವ ಸಾರ್ವಜನಿಕ ದೂರನ್ನು ಪರಿಶೀಲಿಸಿ, ತಪ್ಪಿದ್ದಲ್ಲಿ ಕ್ರಮ ಕೈಗೊಳ್ಳುವ ಅಥವಾ ನಿರ್ದೋಷಿಗಳಾಗಿದ್ದಲ್ಲಿ ಅಂತಹವರನ್ನು ದೋಷಮುಕ್ತರನ್ನಾಗಿ ಮಾಡುವ ಅವಕಾಶ ದೊರಕುವುದೆಂದು ಆಯೋಗದ ಅಧ್ಯಕ್ಷ ಶ್ರೀ ಕೆ. ಹನುಮಂತಯ್ಯನವರು ಇಂದು ವರದಿಗಾರರಿಗೆ ತಿಳಿಸಿದರು.
ಕಾಶ್ಮೀರ ಪಂಡಿತರ ಚಳವಳಿ ಮುಕ್ತಾಯ
ಶ್ರೀನಗರ, ಸೆ. 3– ಕೇಂದ್ರದ ಗೃಹಸಚಿವ ಶ್ರೀ ವೈ.ಬಿ. ಚವಾಣ್ ಅವರು ಮಧ್ಯೆಪ್ರವೇಶಿಸಿದ ಫಲವಾಗಿ ಕಾಶ್ಮೀರ ಪಂಡಿತರು ನಡೆಸುತ್ತಿದ್ದ ಚಳವಳಿಯನ್ನು ಇಂದು ನಿಲ್ಲಿಸಲಾಗಿದೆ.
22 ದಿನಗಳ ಕಾಲ ನಡೆದ ಈ ಚಳವಳಿಯಲ್ಲಿ ಮೂವರು ಮೃತಪಟ್ಟು ಕೆಲವು ನೂರು ಮಂದಿ ಗಾಯಗೊಂಡಿದ್ದರು.