‘ಕೆಲಸಕ್ಕಾಗಿ ಹೊರ ರಾಜ್ಯಗಳಿಂದ ಕಾರ್ಮಿಕರನ್ನು ಗುತ್ತಿಗೆದಾರರು ಕರೆತರುತ್ತಾರೆ. ಅವರಿಗಾಗಿ ಶೌಚಾಲಯ, ವಸತಿ, ವಿದ್ಯುತ್. ನೀರಿನ ವ್ಯವಸ್ಥೆ ಮಾಡಿದ್ದೇವೆ. ಇಲ್ಲಿಯವರೆಗೂ ಶೌಚಾಲಯದ ಅವ್ಯವಸ್ಥೆ ನಮ್ಮ ಗಮನಕ್ಕೆ ಬಂದಿಲ್ಲ’ ಎನ್ನುತ್ತಾರೆ ಬಿಆರ್ಟಿಎಸ್ ಕಾಮಗಾರಿಯನ್ನು ಗುತ್ತಿಗೆ ಪಡೆದು ಕಾರ್ಯ ನಿರ್ವಹಿಸುತ್ತಿರುವ ರಾಜದೀಪ ಕಂಪೆನಿಯ ನೌಕರ ಸಚಿನ್ ಕಾಂಬಳೆ.