ಮದ್ಯದಂಗಡಿ ತೆರೆಯುವ ಸ್ಥಳದಿಂದ ನೂರು ಮೀಟರ್ ದೂರದಲ್ಲಿ ಶಾಲೆ ಇದ್ದು, ಇದರಿಂದ ಶಾಲಾ ಮಕ್ಕಳಿಗೆ ತೊಂದರೆ ಉಂಟಾಗುವ ಸಾಧ್ಯತೆ ಹೆಚ್ಚು. ಕುಂಬಳದಾಳು ಗ್ರಾಮಕ್ಕೆ ಸಾಗುವ ರಸ್ತೆ ತೀರ ಕಿರಿದಾಗಿದ್ದು ಬಸ್ಸು ಹಾಗೂ ಶಾಲಾ ವ್ಯಾನುಗಳ ಸಂಚಾರಕ್ಕೆ ತೊಡಕುಂಟಾಗುದಲ್ಲದೇ ಈ ಭಾಗದ ಜನರಿಗೆ ನಿತ್ಯ ಕಿರಿಕಿರಿ ಉಂಟಾಗಲಿದೆ ಎಂದಿರುವ ಗ್ರಾಮಸ್ಥರು ಮದ್ಯದಂಗಡಿಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ, ಅಬಕಾರಿ ಇಲಾಖೆ ಹಾಗೂ ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರು.ಗ್ರಾಮದ ಬಾಲಕರ ವಿನಾಯಕ ಸಂಘ, ಗಂಗೋತ್ರಿ ಸಂಘ, ಅಕ್ಷಯ ಸ್ವಸಹಾಯ ಸಂಘ ಹಾಗೂ ಮುತ್ತಾರುಮುಡಿ ಗ್ರಾಮಸ್ಥರು ಇದ್ದರು.