ಯೋಜನೆ ನಿರ್ದೇಶಕರಾಗಿದ್ದ ವಿಜಯಕುಮಾರ್ ನಾಗನಾಳ, ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಏಪ್ರಿಲ್ನಲ್ಲಿ ಆರಂಭಿಸಿದ್ದ ನಮ್ಮೂರು ನಮ್ಮಕೆರೆ ಕಾರ್ಯಕ್ರಮದಡಿಯಲ್ಲಿ ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ರಾಮಸ್ವಾಮಿ ಕೆರೆ, ಮಾಲೂರು ತಾಲ್ಲೂಕಿನ ಟೇಕಲ್ ಈಶ್ವರನ ಕೆರೆ, ಮುಳಬಾಗಿಲು ತಾಲ್ಲೂಕಿನ ಬಂಡಾರ್ಲಹಳ್ಳಿಕೆರೆ, ಬಂಗಾರಪೇಟೆ ತಾಲ್ಲೂಕಿನ ಅಂಕತಟ್ಟಿಹಳ್ಳಿಯ ಅಂಕತಟ್ಟಿ ಕೆರೆ ಹಾಗೂ ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರಿನ ಹಿರೇಕೆರೆ ಆಯ್ಕೆ ಮಾಡಿಕೊಂಡಿದ್ದರು.