ಉದ್ಯಮಿ ಮನೆಗೆ ಕನ್ನ: ಸೋಲದೇವನಹಳ್ಳಿ ಬಳಿಯ ಉದ್ಯಮಿ ಶ್ರೀಕಂಠ ಎಂಬುವರ ಮನೆಯ ಬೀಗ ಮುರಿದು ಒಳನುಗ್ಗಿದ್ದ ದುಷ್ಕರ್ಮಿಗಳು, 150 ಗ್ರಾಂ ಚಿನ್ನ ಹಾಗೂ ಎರಡು ಕೆ.ಜಿ ಬೆಳ್ಳಿ ಸಾಮಗ್ರಿಗಳನ್ನು ಕದ್ದೊಯ್ದಿದ್ದಾರೆ. ಬಿಡದಿಯ ಕಾರ್ಖಾನೆಯೊಂದರ ಮಾಲೀಕರಾದ ಅವರು ಕುಟುಂಬ ಸಮೇತ ಶನಿವಾರ (ಆಗಸ್ಟ್ 2) ಹೊರನಾಡಿಗೆ ಹೋಗಿದ್ದರು. ಸೋಮವಾರ ಬೆಳಿಗ್ಗೆ ವಾಪಸ್ ಬಂದಾಗ ಕೃತ್ಯ ನಡೆದಿರುವುದು ಗೊತ್ತಾಗಿದೆ.