ಈ ಕುರಿತು ಶ್ರೀಶೈಲ ಪಾಟೀಲ ಹಾಗೂ ಸಿದ್ಧಾರ್ಥ ನಗರದ ಮುಖಂಡರಾದ ರವಿಕುಮಾರ ಸಿಂಗೆ, ಭೀಮರಾವ್ ಗೌರ ರಸ್ತೆ ಹಾಳಾದ ಬಗ್ಗೆ ಮಾಹಿತಿ ನೀಡಿ ಸಿದ್ಧಾರ್ಥ ನಗರಕ್ಕೆ ಮುಖ್ಯ ರಸ್ತೆಯಿಂದ 1 ಕಿ.ಮೀ ರಸ್ತೆಯಿದ್ದು, ಮಳೆ ಬಂದರೆ ನೀರು ನಿಂತು ರಸ್ತೆ ಹಾಳಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ ಇದಕ್ಕಾಗಿ ನಾವು ಅಫಜಲಪುರಕ್ಕೆ ಮತ್ತು ಬೇರೆ ಕಡೆ ಸಂಚರಿಸಬೇಕಾದರೆ ರಸ್ತೆ ಇಲ್ಲದಂತಾಗಿದೆ. ಈ ಕುರಿತು ಹಲವು ಬಾರಿ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದರೂ ಯಾರೂ ಗಮನಹರಿಸುತ್ತಿಲ್ಲ ಎಂದು ಅವರು ಆರೋಪಿಸಿದರು.